ಭಾರತಕ್ಕೆ ಇದು ಸಾಧ್ಯವಾಗುವುದಾದರೆ ಪಾಕಿಸ್ತಾನಕ್ಕೆ ಏಕೆ ಸಾಧ್ಯವಿಲ್ಲ?’ ಎಂದಿರುವುದು ಗಮನಾರ್ಹವಾಗಿದೆ. ಪಾಕಿಸ್ತಾನಕ್ಕೂ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ತನ್ನ ಪಾಪದ ಕೂಸಾಗಿ ಬೆಳೆಸಿದ ಭಯೋತ್ಪಾದಕತೆ ಎನ್ನುವ ಭಸ್ಮಾಸುರನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಹಂತಕ್ಕೆ ಬಂದು ನಿಂತಿದೆ. ಪಾಕ್ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಅಂತರರಾಷ್ಟ್ರೀಯ ಸಮುದಾಯ ಇನ್ನಷ್ಟು ಗಟ್ಟಿಯಾಗಿ ಸೆಟೆದು ನಿಲ್ಲುವಂತೆ ಭಾರತ ನೋಡಿಕೊಳ್ಳಬೇಕು.
–ಎಚ್.ಎನ್.ಕಿರಣ್ ಕುಮಾರ್,ಹಳೇಹಳ್ಳಿ, ಗೌರಿಬಿದನೂರು