ಶಂಕರೇಗೌಡರು ಸಾಂಕೇತಿಕವಾಗಿ ರೋಗಿಗಳಿಂದ 5 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದರು ಹಾಗೂ ಅವರ ಕೈಗುಣ ತುಂಬಾ ಒಳ್ಳೆಯದು ಎಂಬ ಮಾತು ಜನಜನಿತವಾಗಿದೆ. ಹೀಗಾಗಿ ಅವರ ಬಳಿ ಚಿಕಿತ್ಸೆ ಪಡೆಯಲು ಹಲವಾರು ರೋಗಿಗಳು ದೂರದೂರದ ಊರುಗಳಿಂದ ಬರುತ್ತಿದ್ದರು. ಅನೇಕ ಧನದಾಹಿ ವೈದ್ಯರ ನಡುವೆ ಶಂಕರೇಗೌಡರಂತಹ ನಿಸ್ವಾರ್ಥ ಹಾಗೂ ಜನೋಪಯೋಗಿ ವೈದ್ಯರು ಇರುವುದು ಸುದೈವವೇ ಸರಿ. ಸ್ವತಃ ಡಾಕ್ಟರ್ ಆದರೂ ಸದ್ಯದ ಪರಿಸ್ಥಿತಿಯಲ್ಲಿ ಅವರೊಬ್ಬ ರೋಗಿ. ತಮ್ಮನ್ನು ನಂಬಿ ಬರುವ ರೋಗಿಗಳನ್ನು ಹುರಿದು ಮುಕ್ಕದೆ, ಕರ್ತವ್ಯವನ್ನೇ ದೇವರೆಂದು ಭಾವಿಸಿ ಉತ್ತಮ ಚಿಕಿತ್ಸೆ ನೀಡುವ ಈ ವೈದ್ಯ ಮಹಾಶಯ ನಿಜಕ್ಕೂ ಧನ್ಯ. ಇವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಹಾರೈಸೋಣ.