ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜನೋಪಯೋಗಿ ವೈದ್ಯರ ಆರೋಗ್ಯ ಸುಧಾರಿಸಲಿ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆಯಾದ್ಯಂತ 5 ರೂಪಾಯಿ ಡಾಕ್ಟರ್ ಎಂದೇ ಖ್ಯಾತರಾಗಿರುವ ಡಾ. ಶಂಕರೇಗೌಡ ಅವರು ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿ ಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಅವರಿಗೆ ಸಂಪೂರ್ಣ ವಿಶ್ರಾಂತಿಯ ಅಗತ್ಯ ಇರುವುದನ್ನು ವೈದ್ಯರು ಒತ್ತಿ ಹೇಳಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಶಂಕರೇಗೌಡರು ಸಾಂಕೇತಿಕವಾಗಿ ರೋಗಿಗಳಿಂದ 5 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದರು ಹಾಗೂ ಅವರ ಕೈಗುಣ ತುಂಬಾ ಒಳ್ಳೆಯದು ಎಂಬ ಮಾತು ಜನಜನಿತವಾಗಿದೆ. ಹೀಗಾಗಿ ಅವರ ಬಳಿ ಚಿಕಿತ್ಸೆ ಪಡೆಯಲು ಹಲವಾರು ರೋಗಿಗಳು ದೂರದೂರದ ಊರುಗಳಿಂದ ಬರುತ್ತಿದ್ದರು. ಅನೇಕ ಧನದಾಹಿ ವೈದ್ಯರ ನಡುವೆ ಶಂಕರೇಗೌಡರಂತಹ ನಿಸ್ವಾರ್ಥ ಹಾಗೂ ಜನೋಪಯೋಗಿ ವೈದ್ಯರು ಇರುವುದು ಸುದೈವವೇ ಸರಿ. ಸ್ವತಃ ಡಾಕ್ಟರ್ ಆದರೂ ಸದ್ಯದ ಪರಿಸ್ಥಿತಿಯಲ್ಲಿ ಅವರೊಬ್ಬ ರೋಗಿ. ತಮ್ಮನ್ನು ನಂಬಿ ಬರುವ ರೋಗಿಗಳನ್ನು ಹುರಿದು ಮುಕ್ಕದೆ, ಕರ್ತವ್ಯವನ್ನೇ‌ ದೇವರೆಂದು ಭಾವಿಸಿ ಉತ್ತಮ ಚಿಕಿತ್ಸೆ ನೀಡುವ ಈ ವೈದ್ಯ ಮಹಾಶಯ ನಿಜಕ್ಕೂ ಧನ್ಯ. ಇವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಹಾರೈಸೋಣ.

- ಡಾ. ಕೆ.ವಿ.ವಾಸು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT