ಭಾರತ– ಪಾಕಿಸ್ತಾನದ ನಡುವೆಗಡಿಯೊಂದೇ ಸಮಸ್ಯೆ ಅಲ್ಲ; ಇಲ್ಲಿ ಧರ್ಮವೂ ಸೇರಿಕೊಂಡಿದೆ.ಕಾಶ್ಮೀರದ ನೆಪದಲ್ಲಿ ಅಲ್ಲಿನ ಧರ್ಮಾಂಧರು ಭಾರತದ ವಿರುದ್ಧ ವಿಘಟನಕಾರಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ನಮ್ಮಲ್ಲಿಯೂ ಅವರ ಧರ್ಮಾಚರಣೆ, ಸಿದ್ಧಾಂತಗಳ ಬಗ್ಗೆ ಅಪಪ್ರಚಾರ ನಡೆಸಿ, ಜನರಲ್ಲಿ ದ್ವೇಷ ಉಕ್ಕುವಂತೆ ಭಾಷಣ ಮಾಡುವ ವಾಚಾಳಿಗಳಿದ್ದಾರೆ. ಒಟ್ಟಿನಲ್ಲಿ ಎರಡು ಕಡೆಯೂ ಮೆರೆಯುತ್ತಿರುವುದು ಧರ್ಮಾಂಧತೆ. ಹೀಗಾದರೆ ನಾವು ಒಂದಾಗುವುದು ಯಾವಾಗ? ನಮ್ಮ ಜನರ ತೆರಿಗೆ ಹಣ ಇರುವುದು ಕದನದ ನೆಪದಲ್ಲಿ ಶಸ್ತ್ರಾಸ್ತ್ರ ಖರೀದಿ, ನಾಯಕರ ಕಮಿಷನ್, ಶ್ರೀಮಂತ ರಾಷ್ಟ್ರಗಳ ಖಜಾನೆ ಭರ್ತಿ ಮಾಡಲಿಕ್ಕಾಗಿಯೇ?