‘ರಫೇಲ್ ಖರೀದಿಗೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರ ಯಾವುದೇ ಖಾತರಿ ನೀಡಿಲ್ಲ, ಆದರೆ ಭರವಸೆ ಪತ್ರ ನೀಡಿದೆ, ಅದು ಸರ್ಕಾರದ ಖಾತರಿಗೆ ಸಮ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ (ಪ್ರ.ವಾ., ನ. 15).
ಸರ್ಕಾರದ ತಪ್ಪು ನಡೆಯನ್ನು ವೇಣುಗೋಪಾಲ್ ಅವರು ಈ ರೀತಿ ಸಮರ್ಥಿಸಿಕೊಂಡಿರುವುದು ಸರಿಯಾದ ನಡೆಯಲ್ಲ. ‘ಖಾತರಿ’ ಮತ್ತು ‘ಭರವಸೆ’ಗೆ ವ್ಯತ್ಯಾಸ ಇಲ್ಲವೇ? ಎರಡೂ ಒಂದೇ ಎಂದು ನಿರ್ಧರಿಸಲು ಹೇಗೆ ಸಾಧ್ಯ? ಅಟಾರ್ನಿ ಜನರಲ್ ಅವರ ಈ ಹೇಳಿಕೆ ಬಾಲಿಶವೆನಿಸುತ್ತದೆ.