ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಗಟಗಲ್ನ ದಲಿತ ಕೇರಿಯಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದಕ್ಕೆ, ಮೇಲ್ಜಾತಿಯವರು ಕಿರಾಣಿ ಅಂಗಡಿ ಮತ್ತು ಹೋಟೆಲ್ಗಳನ್ನು ಬಂದ್ ಮಾಡಿ ಅಸಹಕಾರ ತೋರಿಸಿರುವುದನ್ನು ತಿಳಿದು (ಪ್ರ.ವಾ., ಮಾರ್ಚ್ 7) ಮನಸ್ಸಿಗೆ ತುಂಬಾ ನೋವಾಯಿತು.
ಇಂದಿಗೂ ನಮ್ಮ ಸಮಾಜದಲ್ಲಿ ದಲಿತರು ಶೋಷಣೆಗೆ ಒಳಗಾಗುತ್ತಿರುವುದು ಶೋಚನೀಯ. ದಲಿತರಿಗೆ ಕಾನೂನುಗಳಷ್ಟೇ ಸಮಾನತೆ ತಂದುಕೊಡಲಾರವು. ಜನರ ಮನೋಧರ್ಮ ಬದಲಾಗಬೇಕು. ಮನಃಪರಿವರ್ತನೆ ಕೆಲಸ ನಿರಂತರವಾಗಿ ನಡೆಯಬೇಕು. ಆಗಮಾತ್ರ ‘ಮಾನವ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತು ಕಾರ್ಯರೂಪಕ್ಕೆ ಬರಲು ಸಾಧ್ಯ.