ಮೇಘಸ್ಫೋಟವು ನಿಸರ್ಗದ ಜಲಬಾಂಬ್ ಆಗಿರುವ ಕುರಿತು ಟಿ.ಆರ್.ಅನಂತರಾಮು ಅವರ ಲೇಖನ
(ಪ್ರ.ವಾ., ಆ. 3) ಪ್ರಕೃತಿಯ ಉಡಿಯಲ್ಲಿ ಇಂತಹ ಇನ್ನೂ ಅದೆಷ್ಟು ‘ಬಾಂಬ್’ಗಳು ಇವೆಯೋ ಗೊತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಭೂಮಿ ತನ್ನ ಸಮತೋಲನ ಕಾಪಾಡಿಕೊಳ್ಳಲು ಏನೆಲ್ಲ ಮಾಡುವುದೋ ಈ ಹುಲು ಮಾನವನಿಗೆ ಅದೆಲ್ಲಿ ಅರ್ಥವಾಗಬೇಕು? ಸಾಮಾನ್ಯರಾದ ನಾವು ಗುಡುಗು, ಸಿಡಿಲಿಗೇ ನಡುಗಿ ಹೋಗುತ್ತೇವೆ ಇಲ್ಲ ತತ್ತರಿಸುತ್ತೇವೆ. ಜ್ವಾಲಾಮುಖಿ, ಭೂಕಂಪನ, ಸುನಾಮಿ, ಜಲಪ್ರಳಯ, ಚಂಡಮಾರುತದಂತಹವು ಎಷ್ಟು ಜೀವಿಗಳನ್ನು ನುಂಗಿವೆಯೊ? ಅದೆಷ್ಟು ಮನುಷ್ಯನಿರ್ಮಿತಿಗಳ ಸರ್ವನಾಶ ಮಾಡಿವೆಯೊ?