ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ: ಮೋದಿ ಮಾತೂ ಇಲ್ಲ; ಟ್ವೀಟೂ ಇಲ್ಲ

Last Updated 13 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ರಾಜ್ಯಕ್ಕೆ 13 ಸಲ ಬಂದು ಪ್ರಚಾರ ಮಾಡಿದರು. ನೆರೆರಾಜ್ಯ ಮಹಾರಾಷ್ಟ್ರ ವಿಧಾನಸಭೆಗೆ ಇನ್ನೇನು ಚುನಾವಣೆ ಘೋಷಣೆಯಾಗಲಿದೆ. ಅಲ್ಲಿಗೂ ಕನಿಷ್ಠ ಹತ್ತು ಸಲ ಬಂದು ಭಾಷಣ ಮಾಡಬಹುದು. ಪ್ರವಾಹದಿಂದ ಕರ್ನಾಟಕದ ಹಲವು ಜಿಲ್ಲೆಗಳ ಜನರ ಬದುಕು ನಲುಗಿದೆ. ಚುನಾವಣೆ ಸಂದರ್ಭದಲ್ಲಿ ಬಂದು ಹೋಗಲು ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಾದರೆ ಇಂತಹ ಕಷ್ಟದ ಸಂದರ್ಭದಲ್ಲೂ ಬಂದು ನೋಡಲು ಸಮಯ ಹೊಂದಿಸಿಕೊಳ್ಳಬಹುದಲ್ಲವೇ? ಅಧಿಕಾರಸ್ಥರಿಗೆ ಚುನಾವಣೆ ಮಾತ್ರ ಮುಖ್ಯ ಎಂಬುದು ಇದರಿಂದ ಗೊತ್ತಾಗುತ್ತದೆ. ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ.ಪ್ರವಾಹ ಇಳಿದಿದೆ. ಆದರೆ, ಸಾವಿರಾರು ಕುಟುಂಬಗಳಿಗೆ ಈಗಲೂ ನೆಲೆ ಇಲ್ಲವಾಗಿದೆ. ಇದರ ಬಗ್ಗೆ ಮಾತೂ ಇಲ್ಲ. ಟ್ವೀಟೂ ಇಲ್ಲ. ಮಾತು ಸೋತ ಭಾರತ!

–ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT