ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಅಪರಾಧಿಯನ್ನು ಬಿಡುಗಡೆ ಮಾಡಿರುವ ಸುದ್ದಿ (ಪ್ರ.ವಾ., ಮೇ 19) ಓದಿ ಏಕೋ ಕಸಿವಿಸಿಯಾಯಿತು. ರಾಜೀವ್ ಗಾಂಧಿ ಅವರು ಹತ್ಯೆಯಾಗಿ ಸುಮಾರು 30ಕ್ಕೂ ಹೆಚ್ಚು ವರ್ಷಗಳು ಗತಿಸಿಹೊದರೂ ಆ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಲು ಇನ್ನೂ ಸಾಧ್ಯವಾಗದೇ ಇರುವುದು ನಾಚಿಕೆಗೇಡಿನ ಸಂಗತಿ. ಅಷ್ಟಾದರೂ ಕೊನೆಗೆ ಅಪರಾಧಿಯನ್ನು ಬಿಡುಗಡೆ ಮಾಡುವಂತೆ ಆದಾಗ, ‘ಒಬ್ಬ ಮಾಜಿ ಪ್ರಧಾನಿಯ ಕಥೆಯೇ ಹೀಗಾದರೆ ಇನ್ನು ನಮ್ಮ ಪಾಡೇನು?’ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದರೆ ಅಚ್ಚರಿ ಏನಿಲ್ಲ. ಇದರಿಂದ ಜನಸಾಮಾನ್ಯರಿಗೆ ಅಭದ್ರತೆಯ ಸಂದೇಶ ರವಾನೆಯಾದರೆ ಅದಕ್ಕೆ ಹೊಣೆ ಯಾರು?!