ಹೈದರಾಬಾದ್ ಪ್ರಕರಣದ ಆರೋಪಿಗಳ ತಾಯಂ ದಿರು ತಾವೂ ಹೆಣ್ಣಾಗಿ ಇನ್ನೊಬ್ಬ ಹೆಣ್ಣು ಮಗಳ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು, ತಮ್ಮ ಮಕ್ಕಳ ಕೃತ್ಯವನ್ನು ಸಮರ್ಥಿಸಿಕೊಳ್ಳದೆ ನೊಂದವರೊಡನೆ ಧ್ವನಿಗೂಡಿಸಿರುವುದು, ಅವರಿಗೆ ಸೂಕ್ತ ಶಿಕ್ಷೆಯಾಗಲಿ ಎಂದಿರುವುದು ನಿಜಕ್ಕೂ ಸಮಂಜಸವಾಗಿದೆ. ಸರ್ಕಾರ ಇನ್ನಾದರೂ ಕಾನೂನನ್ನು ಬಿಗಿಗೊಳಿಸಲಿ, ವಿಳಂಬ ಮಾಡದೆ ನ್ಯಾಯದಾನ ನೀಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಿ. ಈ ಮೂಲಕ ನಿರ್ಭೀತ, ಸ್ವಸ್ಥ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಲಿ.