ಅನಕೃ ನಿಧನರಾಗಿ ಐವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಅನಕೃ ಆದರ್ಶಗಳು ಮತ್ತು ವ್ಯಕ್ತಿತ್ವದ ಬಗ್ಗೆ ರಘುನಾಥ ಚ.ಹ. ಅವರು ಬರೆದ ಲೇಖನ (ಪ್ರ.ವಾ., ಜುಲೈ 14) ಸಮಯೋಚಿತವಾಗಿದೆ. ಇಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೇಕಾದ ಅನಕೃ ಅವರ ಮಾದರಿಯ ಕನ್ನಡಪ್ರಜ್ಞೆ ಮತ್ತು ವೈಚಾರಿಕತೆಯ ಅಗತ್ಯವನ್ನು ಮನಮುಟ್ಟುವಂತೆ ವಿವರಿಸಿ, ಓದುಗರನ್ನು ಆಲೋಚನೆಗೆ ಹಚ್ಚುತ್ತದೆ. ಲೇಖಕರು ಅನಕೃ ಹೃದಯದಲ್ಲಿ ಬೆಳಗುತ್ತಿದ್ದ ಕನ್ನಡದ ದೀಪದ ಮೂಲಕವೇ ಅನಕೃ ವ್ಯಕ್ತಿತ್ವದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಆದರೆ ಹಿಂದೂ ಧರ್ಮದ ಮೌಲ್ಯಗಳ ಪ್ರತಿಪಾದನೆ ವಿಚಾರವಾಗಿ ಭೈರಪ್ಪನವರ ಕಾದಂಬರಿಗಳ ಬಗ್ಗೆ ಈ ಲೇಖನದಲ್ಲಿ ಟೀಕೆ ಅನಗತ್ಯವಾಗಿತ್ತು.