ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಚಾಲನಾ ಪರವಾನಗಿ ಅಮಾನತು ಮಾಡಲು ಸಾರಿಗೆ ಇಲಾಖೆ ತೀರ್ಮಾನಿಸಿದೆ (ಪ್ರ.ವಾ., ಅ. 20). ಜನ ತಮ್ಮ ಪ್ರಾಣ ರಕ್ಷಣೆ ಸಲುವಾಗಿ ಹೆಲ್ಮೆಟ್ ಧರಿಸುವುದು ಔಚಿತ್ಯ. ಆದರೆ ವಾಹನ ಚಲಾಯಿಸುವಾಗ ಇತರ ಅನೇಕ ಕಾರಣಗಳಿಂದಲೂ ಅವರು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಸಹ ಸರ್ಕಾರ ಕಾಳಜಿ ತೋರಬೇಕು. ರಸ್ತೆ ಹೊಂಡಗಳಿಂದ ವಾಹನ ಸವಾರರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಅದೆಷ್ಟೋ ಜನ ಗುಂಡಿಯಲ್ಲಿ ನಿಲ್ಲುವ ಮಳೆ ನೀರಿನಿಂದ ಅಪಘಾತಕ್ಕೆ ಒಳಗಾಗುತ್ತಾರೆ.