ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ವ್ಯವಸ್ಥೆಯ ಊನಗಳ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸುಸಂದರ್ಭ. ಪ್ರತೀ ಇಲಾಖೆಯೂ ಭ್ರಷ್ಟಾಚಾರಮುಕ್ತ ಮತ್ತು ಜನಸ್ನೇಹಿ ಆಗುವಂತೆ ನೋಡಿ ಕೊಳ್ಳಬೇಕು. ಅದರಲ್ಲಿ ಕಿಂಚಿತ್ತಾದರೂ ನಾವು ಯಶಸ್ಸು ಗಳಿಸಿದರೆ ಅದು ದೊಡ್ಡ ಸಾಧನೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಈ ಮೂಲಕ ನಾವು ಗೌರವ ತೋರಬೇಕು.