ಕನ್ನಡ ನಾಡು, ನುಡಿಯ ಅಧ್ಯಯನಕ್ಕಾಗಿ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಇಂದು ಭ್ರಷ್ಟತೆಯ ಕೂಪವಾಗಿದೆ. ಅಲ್ಲಿನ ವಿದ್ಯಾರ್ಥಿಯಾಗಿಯೇ ನಾನು ಈ ಸಂಗತಿ ಒಪ್ಪಿಕೊಳ್ಳುವುದು ಸಂಕಟದ ಸಂಗತಿ. ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ ಕೂಡಿದ ಆಡಳಿತ ನಿರ್ಲಜ್ಜ ಸ್ಥಿತಿಗೆ ತಲುಪಿದೆ. ಸಂಶೋಧನೆಗಾಗಿಯೇ ಹುಟ್ಟಿಕೊಂಡ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನಾ ಕೋರ್ಸ್ ಪಿಎಚ್.ಡಿಗಾಗಿ ನಾಲ್ಕು ವರ್ಷಗಳಿಂದ ಅರ್ಜಿಯನ್ನೇ ಕರೆದಿಲ್ಲ! ರಾಷ್ಟ್ರೀಯ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಂದ ಹಣ ಪಡೆಯುವ ಪ್ರಾಧ್ಯಾಪಕರಿದ್ದಾರೆ. ಇಂತಹವರಿಗೆ ಕುಲಪತಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪವಿದೆ.