ಏಕೆಂದರೆ ಮೊದಲನೆಯದಾಗಿ, ಒಬ್ಬ ವ್ಯಕ್ತಿ ಏಕಕಾಲಕ್ಕೆ ಎರಡು ಕಡೆ ಕೆಲಸ ಮಾಡುವುದು ತಾಂತ್ರಿಕವಾಗಿ ಅಸಾಧ್ಯ. ಎರಡನೆಯದಾಗಿ, ಒಬ್ಬನೇ ವ್ಯಕ್ತಿಗೆ ಎರಡು ಕಡೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು ಇನ್ನೊಬ್ಬ ಅರ್ಹ ವ್ಯಕ್ತಿ ‘ಊಟವಿಲ್ಲದೆ ಹಸಿದುಕೊಂಡು ಮಲಗುವಂತೆ ಮಾಡುವುದು’ ಜವಾಬ್ದಾರಿಯುತ ಸರ್ಕಾರ ಹಾಗೂ ಸಮಾಜದ ಲಕ್ಷಣವಲ್ಲ. ಇದು ಸರ್ಕಾರವೇ ಮಾಡುತ್ತಿರುವ ‘ಸಾಮಾಜಿಕ ಅನ್ಯಾಯ’. ಹೀಗಾಗಿ ಸರ್ಕಾರ ಎರಡೂ ಕಡೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ತಕ್ಷಣ ತೆಗೆದುಹಾಕಿ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಟ್ಟು ‘ಸಾಮಾಜಿಕ ನ್ಯಾಯ’ ದೊರಕಿಸಲಿ.