ವರ್ಕ್ಆರ್ಡರ್ ಇಲ್ಲದೇ ಗುತ್ತಿಗೆ ಕಾಮಗಾರಿ ಮಾಡಲು ಮೌಖಿಕ ಆದೇಶ ನೀಡಿ, ಈಗ ಶೇ 40 ಲಂಚದ ಹಣ ನೀಡದಿರುವಾಗ ಸತಾಯಿಸಿದ ಪ್ರಯುಕ್ತ ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದಿರುವ ಪ್ರಕರಣದಿಂದ ಲಂಚದ ಪ್ರಮಾಣ ಮಾತ್ರ ಬಯಲಾಗಿಲ್ಲ, ಸರ್ಕಾರದಲ್ಲಿ ವರ್ಕ್ಆರ್ಡರ್ ಇಲ್ಲದೆ ಮೌಖಿಕ ಆದೇಶದ ಮೂಲಕವೇ ಕೋಟ್ಯಂತರ ರೂಪಾಯಿ ಕಾಮಗಾರಿಗೆ ಹಸಿರು ನಿಶಾನೆ ತೋರಿಸುವುದು, ಅದರ ಬಿಲ್ ಪಾವತಿಸಲು ಶೇಕಡಾವಾರು ಹಣದ ಬೇಡಿಕೆ ಇಡುವುದು, ಅಕ್ರಮ ಹಣಕ್ಕಾಗಿ ಉನ್ನತ ಮಟ್ಟದಲ್ಲಿ ಚೌಕಾಸಿ ಮಾಡಿ, ಕೊನೆಗೆ ಅನೈತಿಕವಾಗಿ ಪರಸ್ಪರ ಒಪ್ಪಿಕೊಂಡು ಲಂಚ ಪಡೆಯುತ್ತಿರುವುದು ಸಾಬೀತಾಗಿದೆ.