‘ಹಿರಿಯ ರಾಜಕಾರಣಿಯಾಗಿರುವ ನನ್ನನ್ನೂ ಇಂದಿಗೂ ದೇವಸ್ಥಾನದ ಒಳಗೆ ಸೇರಿಸುವುದಿಲ್ಲ’ ಎಂಬ ಕಾಂಗ್ರೆಸ್ನ ಹಿರಿಯ ನಾಯಕ ಡಾ. ಜಿ.ಪರಮೇಶ್ವರ ಅವರ ಮಾತು ಯಾರಿಗಾದರೂ ನೋವು ತರುವಂತಹದ್ದು. ಸಮಾನತೆಯ ಹರಿಕಾರರ ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ನಾವೆಲ್ಲರೂ ಕೂಡಿ ಅದ್ಧೂರಿಯಾಗಿ ಆಚರಿಸುತ್ತೇವೆ. ಆದರೆ ಅವರ ತತ್ವ, ಆದರ್ಶಗಳನ್ನು ಮಾತ್ರ ವಕ್ರದೃಷ್ಟಿಯಿಂದ ನೋಡುತ್ತೇವೆ.