ಇಂಥ ನೀಚ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಈ ನಾಡಿನ, ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈಚಾರಿಕ ಚಳವಳಿಯ ಅಗತ್ಯ ಇದೆ ಎಂಬುದನ್ನು ಈ ಘಟನೆ ಪರೋಕ್ಷವಾಗಿ ಬಿಂಬಿಸುತ್ತದೆ. ಬಸವಣ್ಣ, ಕನಕದಾಸ, ಕುವೆಂಪು ಅವರಂಥ ದಾರ್ಶನಿಕ ವ್ಯಕ್ತಿತ್ವವುಳ್ಳವರು ಹುಟ್ಟಿರುವ ನಮ್ಮ ಕನ್ನಡ ನಾಡಿನಲ್ಲಿ ಇಂಥ ಬಾಲಿಶ ಹಾಗೂ ಅಸಹನೀಯ ಘಟನೆಗಳು ಸಂಭವಿಸದಂತೆ ಕಾರ್ಯಕ್ರಮಗಳನ್ನು ರೂಪಿಸುವುದು ನಾಡಿನ ಎಲ್ಲ ವೈಜ್ಞಾನಿಕ, ವೈಚಾರಿಕ ಮನೋಭಾವವುಳ್ಳವರ ಆದ್ಯ ಕರ್ತವ್ಯವಾಗಿದೆ.