ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆಯಾಗಬೇಕಾಗಿರುವ ರೈತರು ದಿನಾಲೂ ಸೈಬರ್ ಕೇಂದ್ರಗಳಿಗೆ ಅಲೆಯುವಂಥ ಪರಿಸ್ಥಿತಿ ಎದುರಾಗಿದೆ. ಯಾವತ್ತು ನೋಡಿದರೂ ಅಲ್ಲಿ ಸರ್ವರ್ ಸಮಸ್ಯೆಯಿಂದಾಗಿ ನೆಟ್ವರ್ಕ್ ಸಿಗುವುದಿಲ್ಲ. ಜನ ಬೆಳಗಿನಿಂದ ಸಂಜೆಯವರೆಗೂ ಕಾದು ಸುಸ್ತಾಗಿ ಮನೆಗೆ ಮರಳುವಂಥ ದುಃಸ್ಥಿತಿಯನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಕೊನೆಯ ದಿನಾಂಕವನ್ನು ಈಗ ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಆದರೆ ಈ ಸರ್ವರ್ ಸಮಸ್ಯೆಯಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜನರಿಗಾಗಿರುವ ತೊಂದರೆಯನ್ನು ನೀಗಿಸಬೇಕು.