‘ಗಾಳಕ್ಕೆ ಸಿಲುಕುವುದು ಬೇಡ’ ಎಂಬ ಶೀರ್ಷಿಕೆಯ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ಆ. 4) ಅರ್ಥಪೂರ್ಣವಾಗಿದೆ. ಸುಲಭವಾಗಿ ಎಲ್ಲರಿಗೂ ನಿಲುಕುವಂತೆ ಅವರು ವಿವರಿಸಿದ್ದಾರೆ. ಜಾತಿ, ಧರ್ಮ, ಪ್ರದೇಶ, ಭಾಷೆಯ ಹೆಸರಿನಲ್ಲಿ ವೋಟಿಗಾಗಿ ಗಾಳ ಹಾಕುವ ರಾಜಕಾರಣಿಗಳ ಹುನ್ನಾರಗಳನ್ನು ಜನ ಅರಿತು ಹೊಣೆಗಾರಿಕೆಯಿಂದ ಮತ ಚಲಾಯಿಸಿದರೆ ಜನತಂತ್ರದ ಬೇರು ಬಲಗೊಳ್ಳುತ್ತದೆ.