ಇವರಷ್ಟೇ ಅಲ್ಲ, ವಿವಿಧ ಧರ್ಮಗಳ ಮುಖಂಡರು ಮತ್ತು ರಾಜಕಾರಣಿಗಳು ಕೂಡ ಇಂತಹದ್ದೇ ಭಾಷಣಗಳನ್ನು ಮಾಡಲಾರಂಭಿಸಿದ್ದಾರೆ. ದ್ವೇಷಪೂರಿತ ಹೇಳಿಕೆಗಳಿಂದಲೇ ಕೋಮು ಗಲಭೆಗಳು ನಡೆದು ಜನರ ಆಸ್ತಿ ಪಾಸ್ತಿ ನಷ್ಟವಾಗಿದ್ದಲ್ಲದೆ, ಕೊಲೆಗಳೂ ನಡೆದುಹೋಗಿವೆ. ಸಮಾಜದ ಶಾಂತಿ, ಸಾಮರಸ್ಯವನ್ನು ಕದಡುವ ಇಂತಹ ಭಾಷಣಕಾರರಿಗೆ ತಕ್ಕ ಶಿಕ್ಷೆ ಆಗದಿದ್ದರೆ ಸಮಾಜಕ್ಕೆ ಅಪಾಯ ಖಂಡಿತ. ಅದಕ್ಕೆ ಅವಕಾಶ ಕೊಡಬಾರದು.