‘ಭೀಮ, ದುರ್ಯೋಧನ ಸೇರಿ ರಾಮಾಯಣ ಮತ್ತು ಮಹಾಭಾರತದಲ್ಲಿನ ಪಾತ್ರಗಳನ್ನು ಒಳಗೊಂಡ ಪೌರಾಣಿಕ ನಾಟಕಗಳು ಈಗ ಅಪ್ರಸ್ತುತ’ ಎಂದು ಕವಿ ಪ್ರೊ.ನಾರಾಯಣ ಘಟ್ಟ ಹೇಳಿರುವುದು ವರದಿಯಾಗಿದೆ (ಪ್ರ.ವಾ.,ಆ. 3). ಭಾರತೀಯರ ಪಾಲಿಗೆ ಮಹಾಕಾವ್ಯಗಳಾಗಿರುವ ಮಹಾಭಾರತ ಮತ್ತು ರಾಮಾಯಣದಲ್ಲಿನ ಪಾತ್ರಗಳು ಸದಾ ಕಾಲಕ್ಕೂ ಪ್ರಸ್ತುತವೇ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರೂ ಈ ಪಾತ್ರಗಳ ಮೂಲಕ ಕಲಿಯುವುದು ಬಹಳಷ್ಟಿದೆ.