ಇತ್ತೀಚೆಗೆ ನಿಧನರಾದ ಉದ್ಯಮಿ ರಾಹುಲ್ ಬಜಾಜ್ ಅವರು ದ್ವಿಚಕ್ರ, ತ್ರಿಚಕ್ರ ಉತ್ಪಾದಕ ಬಜಾಜ್ ಸಂಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವುದರಲ್ಲಿ ಸಫಲರಾಗಿದ್ದರು. ಯಾವ ಪಕ್ಷವೇ ಸರ್ಕಾರಗಳನ್ನು ನಡೆಸುತ್ತಿರಲಿ, ಸರ್ಕಾರದ ಧೋರಣೆಗಳು ಸರಿಯಿಲ್ಲವೆಂದಾದರೆ ನೇರವಾಗಿಯೇ ಟೀಕಿಸುತ್ತಿದ್ದರು. ಉದ್ಯಮ ರಂಗದಲ್ಲಿ ಇದ್ದುಕೊಂಡು ‘ಜೀ ಹುಜೂರ್’ ಎನ್ನದೇ ವ್ಯವಸ್ಥೆಯ ವಿರುದ್ಧ ಮಾತನಾಡುವುದು ಬಹುಶಃ ರಾಹುಲ್ ಬಜಾಜ್ ಅವರಂತಹ ಧೈರ್ಯಶಾಲಿಗಳಿಗೆ ಮಾತ್ರ ಸಾಧ್ಯ.