ಪ್ರವಾಹದಿಂದಾಗಿ ಕೇರಳದಲ್ಲಿ ಈ ಬಾರಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ನಮ್ಮದೇ ರಾಜ್ಯದ ಕೊಡಗು ಜಿಲ್ಲೆಯಲ್ಲೂ ಜನರು ತತ್ತರಿಸಿಹೋಗಿದ್ದಾರೆ.
ಇಂಥ ಸಂದರ್ಭದಲ್ಲೇ ನಮ್ಮ ನೀರಾವರಿ ಸಚಿವರು, ‘ಮೇಕೆದಾಟು ಯೋಜನೆಯ ಸಲುವಾಗಿ 4000 ಎಕರೆಅರಣ್ಯ ಪ್ರದೇಶ ಮುಳುಗಡೆ ಆಗುತ್ತದೆ’ ಎಂದು ಹೇಳಿರುವುದು ಆತಂಕ ಮೂಡಿಸುತ್ತದೆ.
ಪರಿಸರದ ಮೇಲೆ ಪರಿಣಾಮ ಬೀರುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಪರಿಸರ ತಜ್ಞರ ಅಭಿಪ್ರಾಯ ಪಡೆಯುವ ಪರಿಪಾಟವನ್ನು ಇನ್ನಾದರೂ ರೂಢಿಸಿಕೊಳ್ಳುವುದು ಒಳ್ಳೆಯದು.