ಕ್ರಿ.ಶ. 1900ರಿಂದ ಮುಂದಿನ ಕಾಲವನ್ನು, ಇಲ್ಲಿ ಗಾಂಧಿಯುಗ ಎಂದು ಭಾವಿಸೋಣ. ಕ್ರಿ.ಶ. 1930ರ ಸುಮಾರು, ಅನೇಕ ಪ್ರತಿಭಟನಕಾರರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಚಂದ್ರಶೇಖರ ಆಜಾದ್ರಂಥವರು ಹುತಾತ್ಮರಾದರು. ಇಲ್ಲಿಂದ ಗಾಂಧಿ, ನೆಹರೂ, ವಲ್ಲಭಭಾಯ್ ಪಟೇಲ್, ತಿಳಕ್ ಮುಂತಾದವರ ಮುಂದಾಳತ್ವದಲ್ಲಿ, ದೇಶದ ತುಂಬಾ ಸ್ವಾತಂತ್ರ್ಯ ಹೋರಾಟ ಉಗ್ರರೂಪ ತಾಳಿತು. ಈ ಹೋರಾಟದಲ್ಲಿ ಭಾಗಿಯಾದವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು.