ಕನ್ನಡ ಭಾಷೆ ಕಸ್ತೂರಿಯಂತೆ ಕಂಪು. ಕೋಗಿಲೆ ಸ್ವರದಂತೆ ಇಂಪು. ಆದರೆ ಅದು ರಾಜಕಾರಣಿಗಳ ಬಾಯಿಗೆ ಸಿಲುಕಿ ದುರ್ನಾತ, ಕರ್ಕಶ ಆಗತೊಡಗಿದೆ.
ಲಕ್ಷಾಂತರ ಜನರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಭಾಷೆ ಆ ಜನರ ನೋವು ನಲಿವಿಗೆ ವಾಣಿಯಾಗಬೇಕಿತ್ತು.ಸುಸಂಸ್ಕಾರದ ಕಹಳೆಯಾಗಬೇಕಿತ್ತು.
ಇನ್ನೂ ಒಂದು ದುರಂತ ಎಂದರೆ, ನಾಯಕರು ಒಂದು ಸಲ ಹೇಳಿದ್ದರೆ ನಮ್ಮ ವಾಹಿನಿಗಳು ಅಂತಹ ಅಸಭ್ಯ ಪ್ರಯೋಗವನ್ನು ಪದೇ ಪದೇ ತೋರಿಸುತ್ತಿರುವುದು ಯಾವ ಸಂಭ್ರಮಕ್ಕೋ. ಕೇಳಿ ಕೇಳಿ ನಮಗೆ ಅಸಹ್ಯವಾದರೆ, ಮಕ್ಕಳು ಅದನ್ನೇ ರೂಢಿಸಿಕೊಳ್ಳುತ್ತಾರೆ. ಭಾಷೆ ಮರ್ಯಾದೆ ಕಳೆದುಕೊಳ್ಳುತ್ತದೆ.
ಉತ್ತಮ ಭಾಷಾ ಪ್ರಯೋಗದ ಜೊತೆಗೆ, ವಿಷಯ ಮಂಡನೆಯ ಪ್ರೌಢಿಮೆ ಮೆರೆಯುವವರ ಧ್ವನಿಗಳು ನಮ್ಮ ಸಂಸತ್ತಿನಲ್ಲಿ ಮೊಳಗಲಿ. -ಸತ್ಯಬೋಧ,ಬೆಂಗಳೂರು