ರಾಜಧಾನಿಯಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ ವರ್ಷವಿಡೀ ನಡೆಯುವುದೇಕೆ? ವೈಟ್ ಟಾಪಿಂಗ್, ಮೆಟ್ರೊ, ಅಂಡರ್ಪಾಸ್, ಟೆಂಡರ್ಶ್ಯೂರ್, ಮೇಲ್ಸೇತುವೆ... ಹೀಗೆ ಒಂದಿಲ್ಲೊಂದು ಕಾಮಗಾರಿಗಳಿಂದಾಗಿ ನಿರಂತರ ನರಕ ದರ್ಶನ. ಬೇಸಿಗೆ ಮಳೆಗೇ ಹೀಗಾದರೆ ಇನ್ನು ಮುಂಗಾರು ಮಳೆಗೆ ನಾಗರಿಕರು ಎಂಥ ಕಷ್ಟಗಳನ್ನು ಅನುಭವಿಸಬೇಕಾಗಿ ಬರಬಹುದೋ. ಬಿಬಿಎಂಪಿ ಯಾರ ಹಿತ ಕಾಯುತ್ತಿದೆ?
-ಕಾಡನೂರು ರಾಮಶೇಷ,ಬೆಂಗಳೂರು