ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಬಹಿರ್ದೆಸೆ– ಚಿಂತೆ ಬಿಡಿಸಿ

Last Updated 8 ಮೇ 2019, 17:35 IST
ಅಕ್ಷರ ಗಾತ್ರ

ಹೊತ್ತು ಏರಿದರೂ ಚಿಂತೆ,ಕತ್ತಲಾದರೂ ಚಿಂತೆ, ಕಳ್ಳಕಾಕರ ಚಿಂತೆ,ಕಲ್ಲು ಮುಳ್ಳುಗಳ ಚಿಂತೆ,ನಾಯಿ ಹಂದಿಗಳ ಚಿಂತೆ,ಯಾರಾದರೂ ಬಂದಾರೆಂಬ ಚಿಂತೆ... ಇದು ಗ್ರಾಮೀಣ ಭಾಗದಲ್ಲಿ ಬಯಲು ಬಹಿರ್ದೆಸೆಯನ್ನು ಅವಲಂಬಿಸಿರುವವರ ಸಂಕಷ್ಟ. ಅವರ ಈ ಬಗೆಯ ಎಲ್ಲ ಚಿಂತೆಗಳಿಗೆ ಶಾಶ್ವತ ಪರಿಹಾರವೆಂದರೆ ಶೌಚಾಲಯ ನಿರ್ಮಾಣ.

ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಪ್ರೋತ್ಸಾಹಧನವನ್ನು ನೀಡಿರುವುದರ ಪರಿಣಾಮವಾಗಿ ಕೆಲವು ಕಡೆ ಶೌಚಾಲಯಗಳು ಕಾಣಸಿಗುತ್ತವೆ. ಆದರೆ ಅಂಕಿ ಅಂಶಗಳಲ್ಲಿ ಇರುವಷ್ಟು ಶೌಚಾಲಯಗಳ ಸಂಖ್ಯೆ ವಾಸ್ತವದಲ್ಲಿ ಇಲ್ಲ. ಇದ್ದರೂ ಕೆಲವರು ಅವುಗಳನ್ನು ಬಳಸುವುದಿಲ್ಲ. ಮನುಷ್ಯನ ಮೂಲಭೂತ ಅವಶ್ಯಕತೆಗ
ಳಲ್ಲಿ ಶೌಚಾಲಯವೂ ಒಂದು ಎಂದು ಅರಿತು, ಸಮಾಜ ಮತ್ತು ಸರ್ಕಾರ ಬಹಿರ್ದೆಸೆಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು.
-ರಮೇಶ ಕೊ.ನಾ.,ಇಸಾಮುದ್ರ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT