ಮೈಸೂರಿನಿಂದ ಶಿವಮೊಗ್ಗಕ್ಕೆ ರಾತ್ರಿ ವೇಳೆ ಸಂಚರಿಸುತ್ತಿದ್ದ ರೈಲು ಪ್ರಯಾಣವನ್ನು ಕಳೆದ ಆರೇಳು ತಿಂಗಳುಗಳಿಂದ ರದ್ದುಪಡಿಸಲಾಗಿದೆ. ಬದಲಾಗಿ, ಬೆಂಗಳೂರು ಮೂಲಕ ಪ್ರಯಾಣಿಸುವಂತೆ ಮಾಡಲಾಗಿದೆ. ಇದು ಅವೈಜ್ಞಾನಿಕ ಹಾಗೂ ತೀರಾ ಕೆಟ್ಟ ನಿರ್ಧಾರ. ಮೈಸೂರು– ಶಿವಮೊಗ್ಗಕ್ಕೆ ರಾತ್ರಿ ವೇಳೆಯ ರೈಲು ಸಂಚಾರಕ್ಕೆ ಬಹಳ ದಿನದ ಬೇಡಿಕೆ ಇತ್ತು. ಹೀಗಾಗಿ ರೈಲ್ವೆ ಇಲಾಖೆಯು ಒಂದು ಬೋಗಿಗೆ ಮೈಸೂರು– ಧಾರವಾಡ ರೈಲಿನ ಮೂಲಕ ಅರಸೀಕೆರೆವರೆಗೂ ಸಂಪರ್ಕ ಕಲ್ಪಿಸಿ, ಅಲ್ಲಿಂದ ಮುಂದೆ ಬೆಂಗಳೂರು– ಶಿವಮೊಗ್ಗ ರೈಲಿಗೆ ಈ ಬೋಗಿಯನ್ನು ಸೇರಿಸುವ ವ್ಯವಸ್ಥೆ ಮಾಡಿತ್ತು.