ಸರ್ಕಾರಿ ನೌಕರರಿಗೆ ನೀಡಲಾಗುವ ವಾರ್ಷಿಕ ರಜೆಗಳಿಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಹಲವಾರು ಜಯಂತಿಗಳ ರಜೆಗಳನ್ನು ರದ್ದುಪಡಿಸಿ, ಅವುಗಳನ್ನು ನಿರ್ಬಂಧಿತ ರಜೆಗಳನ್ನಾಗಿ ಪರಿವರ್ತಿಸುವ ಸಲಹೆ ನೀಡಿದೆ. ಇದು ಸಮಂಜಸವೇ. ಈಗಲೂ ಹಳ್ಳಿಗಳ ಮಟ್ಟದಲ್ಲಿ ಸರ್ಕಾರಿ ರಜೆಗಳನ್ನು ಅರಿಯದೆ, ಆ ದಿನಗಳಂದು ತಾವು ಮಾಡುವ ಕೂಲಿ ಕೆಲಸ ಬಿಟ್ಟು ಯಾವ್ಯಾವುದೋ ಕೆಲಸಗಳಿಗಾಗಿ ಸರ್ಕಾರಿ ಕಚೇರಿ, ಬ್ಯಾಂಕುಗಳಿಗೆ ಅಲೆದು ಸಾಕಾಗುವ ಸಾಮಾನ್ಯ ಜನರಿದ್ದಾರೆ. ಅವರ ಬವಣೆ ಇದರಿಂದ ನಿವಾರಣೆಯಾಗಬಹುದು.