ಕರ್ತವ್ಯನಿಷ್ಠೆ ಹಾಗೂ ಮಾನವೀಯತೆಗೆ ಹೆಸರಾಗಿದ್ದ ಪೊಲೀಸ್ ಅಧಿಕಾರಿ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರದಲ್ಲಿ ಇರುವವರೆಗೂ ಖಾಕಿಗೆ ಕಳಂಕ ಹಚ್ಚದೆ ಕರ್ತವ್ಯ ನಿರ್ವಹಿಸಿದವರು ಅವರು. ಇಂತಹ ಅಧಿಕಾರಿಗಳ ಸಂಖ್ಯೆ ರಾಜ್ಯದಲ್ಲಿ ಅಧಿಕವಾಗಲಿ. ಇವರ ವಿದಾಯದಿಂದ ಪೊಲೀಸ್ ಇಲಾಖೆ ಒಬ್ಬ ಸಮರ್ಥ ದಂಡನಾಯಕನನ್ನು ಕಳೆದುಕೊಂಡಂತಾಗಿದೆ.