ಎದೆ ಮಟ್ಟಕ್ಕೆ ಬೆಳೆದು ನಿಂತ ಮಕ್ಕಳೂ ಒಂದೇ ನಾವು ಬೆಳೆದ ಬೆಳೆಯೂ ಒಂದೇ. ಕಷ್ಟಪಟ್ಟು ಆರೈಕೆ ಮಾಡಿದ ಬೆಳೆಯು ಕಣ್ಣ ಮುಂದೆಯೇ ಒಣಗುವುದನ್ನು ನೋಡಿದರೆ ಯಾವ ರೈತನಿಗೆ ತಾನೇ ನೋವಾಗದು? ನಗರ ಪ್ರದೇಶದಲ್ಲಿ ನೀರನ್ನು ಪೋಲು ಮಾಡುವವರು ಸ್ವಲ್ಪ ಎಚ್ಚರವಹಿಸಿ, ನೀರು ಉಳಿಸಿ ಅದನ್ನು ನಮಗೆ ನೀಡಿದರೆ ನಾವು ನಮ್ಮ ಬೆಳೆಯನ್ನು ಉಳಿಸಿಕೊಳ್ಳಬಹುದು.