ಸಚಿವ ಸ್ಥಾನ ಕೆಲವರ ಗುತ್ತಿಗೆಯೇ ಎನ್ನುವ ಅನುಮಾನ ಈಗ ಬರುತ್ತಿದೆ. ಯಾವುದೋ ನೆಪದಲ್ಲಿ ಮಂತ್ರಿಮಂಡಲ ರಚನೆ ಕಾರ್ಯ ಮುಂದಕ್ಕೆ ಹೋಗುತ್ತಿದ್ದು, ಸಚಿವ ಸಂಪುಟ ರಚನೆ ಪ್ರಕ್ರಿಯೆಯು ದೋಸ್ತಿ ಸರ್ಕಾರದ ಹಾದಿಯಲ್ಲೇ ಹೋಗುತ್ತಿರುವಂತೆ ಕಾಣುತ್ತಿದೆ. ಸರ್ಕಾರ ನಿಭಾಯಿಸುವುದು ಯಡಿಯೂರಪ್ಪನವರಿಗೂ ಸುಲಭವಲ್ಲ ಎನ್ನುವ ರಾಜಕೀಯ ಪಂಡಿತರ ಭವಿಷ್ಯ ನಿಜವಾಗುವ ಲಕ್ಷಣಗಳು ಕಾಣುತ್ತಿವೆ.
-ರಮಾನಂದ ಶರ್ಮಾ, ಬೆಂಗಳೂರು