ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಸಂಖ್ಯೆ ಕಡಿಮೆ. ನಿಷ್ಠೆ, ಪ್ರಾಮಾಣಿಕತೆಯ ದಾರಿಯಲ್ಲೇ ನಡೆಯಬೇಕೆಂದು ಗಟ್ಟಿ ನಿರ್ಧಾರ ಮಾಡಿದವರಿಗೆ ಈ ರೀತಿಯ ಶಿಕ್ಷೆ ದೊರೆತಿರುವುದು ಇದೇ ಮೊದಲಲ್ಲ. ಬಹಳ ಹಿಂದಿನಿಂದಲೂ ನಡೆದುಬಂದ ಪರಿಪಾಟ ಎಂಬುದು ಕಹಿಸತ್ಯ! ಅಷ್ಟಾದರೂ ಎಂದಿಗೂ ಸತ್ಯಕ್ಕೇ ಜಯ ಎಂಬುದನ್ನು ಇದರ ಹಿಂದಿರುವ ಸೂತ್ರಧಾರಿಗಳು ಅರಿಯಬೇಕಿದೆ.