ಪ್ರಧಾನಿ ನರೇಂದ್ರ ಮೋದಿ ಅವರು ಮಾಮಲ್ಲಪುರಂ ಕಡಲ ಕಿನಾರೆಯಲ್ಲಿ ಸುಮಾರು 30 ನಿಮಿಷ ಪ್ಲಾಗಿಂಗ್ ನಡೆಸಿದ್ದಾರೆ (ಪ್ರ.ವಾ., ಅ. 13). ಪ್ರಧಾನಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕಸ ಹೆಕ್ಕುವ, ಕಸ ಗುಡಿಸುವ ಕೆಲಸ ಮಾಡಿರುವುದನ್ನು ಹಿಂದೆ ಕೇಳಿರಲಿಲ್ಲ, ಮುಂದೆ ಕೇಳುತ್ತೇವೋ ಇಲ್ಲವೋ ಗೊತ್ತಿಲ್ಲ. ‘ಸ್ವಚ್ಛ ಭಾರತ್’ ಅಭಿಯಾನದಡಿ ಮೋದಿ ಅವರು ಮಾಡುತ್ತಿರುವ ಇಂತಹ ಕೆಲಸಗಳು ಪ್ರಶಂಸನೀಯ. ಆದರೆ, ಒಬ್ಬ ನಾಯಕ ಕೆಲಸ ಮಾಡಿಸಬೇಕೇ ವಿನಾ ತಾನೇ ಅದನ್ನು ಮಾಡಬಾರದು. ಕಸ ಗುಡಿಸುವ ಕೆಲಸವನ್ನು ಯಾರು ಬೇಕಾದರೂ ಮಾಡಿಯಾರು. ಆದರೆ ಪ್ರಧಾನಿ ಕೆಲಸವನ್ನು ಮೋದಿಯವರೇ ಮಾಡಬೇಕಾಗಿರುತ್ತದೆ.