ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ತಮ್ಮ ಎರಡೂವರೆ ವರ್ಷದ ಪುತ್ರಿ ಖುಷಿಯನ್ನು ಅಂಗನವಾಡಿಗೆ ಸೇರಿಸಿ ಅಲ್ಲಿನ ಇತರ ಮಕ್ಕಳ ಜೊತೆ ಬೆರೆತು ಕಲಿಯುವಂತೆ ಮಾಡಿದ್ದಾರೆ(ಪ್ರ.ವಾ., ಅ. 16). ಈ ಮೂಲಕ, ಸರ್ಕಾರಿ ಶಾಲೆಗಳ ಪರ ಬರೀ ಭಾಷಣ ಮಾಡದೆ ಸ್ವತಃ ಅನುಸರಿಸಿದ್ದಾರೆ.
ಇವರ ನಡವಳಿಕೆ ಮಾದರಿಯದಾಗಿದ್ದು ಎಲ್ಲ ಸರ್ಕಾರಿ ಅಧಿಕಾರಿಗಳೂ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಅವುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ.