ದುರಂತ ಎಂದರೆ, ಇವರಿಗೆ ಸ್ವತಃ ತಮಗೆ ಆಗುತ್ತಿರುವ ಅನ್ಯಾಯದ ಅರಿವಿಲ್ಲ. ಸಂಸತ್ತಿನಲ್ಲಿ ಸಂಸದರು ಇಂಗ್ಲಿಷ್, ಹಿಂದಿ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಬೇಕಾದರೆ ಪೂರ್ವಾನುಮತಿ ಪಡೆದುಕೊಳ್ಳಬೇಕು. ಹಿಂದಿಯೇತರ ಭಾಷಿಕರಿಗೆ ಪರಕೀಯ ಭಾವನೆ ಮೂಡಲು ಇನ್ನೇನು ಬೇಕು? ಹೋದಲ್ಲಿ ಬಂದಲ್ಲಿ ಬಹುತ್ವದ ಬಗ್ಗೆ ಮಾತನಾಡುವ ಕನ್ಹಯ್ಯ ಅವರು, ಬಹುತ್ವದ ತಾಯಿಬೇರುಗಳಂತಿರುವ ಇಂತಹ ಗಂಭೀರ ವಿಚಾರಗಳಿಗೂ ಧ್ವನಿಯಾಗಬೇಕು. ಇಲ್ಲದೇ ಹೋದರೆ ಅವರ ಮಾತುಗಳನ್ನು ಮತ್ತೊಂದು ಭಾವನಾತ್ಮಕ ಅತಿರೇಕವಾಗಿ ಮಾತ್ರ ನೋಡಬೇಕಾಗುತ್ತದೆ.