ಬಾಲಸುಬ್ರಹ್ಮಣ್ಯಂ ಅವರು ದಕ್ಷಿಣ ಭಾರತದ ಭಾಷೆಗಳಿಗಷ್ಟೇ ಅಲ್ಲ ಬಾಲಿವುಡ್ನ ಅನೇಕ ಸಿನಿಮಾಗಳಿಗೂ ಹಿನ್ನೆಲೆ ಗಾಯನ ನೀಡಿದ್ದಾರೆ. ಅವರ ಕಂಠದಿಂದ ಬಂದ ನೂರಾರು ಹಿಂದಿ ಹಾಡುಗಳು ಸಾಕಷ್ಟು ಜನಪ್ರಿಯವೂ ಆಗಿವೆ. ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದಾರೆ. ಮೇಲಾಗಿ, ಅವರು ಉತ್ತರ ಭಾರತೀಯರಿಗೆ ಅಪರಿಚಿತ ವ್ಯಕ್ತಿಯೇನೂ ಅಲ್ಲ. ಹೀಗಿರುವಾಗ, ಸನಾತನ ಸಂಸ್ಕೃತಿ, ಭಾರತೀಯ ಸಂಪ್ರದಾಯಗಳನ್ನು ಪ್ರತಿಪಾದಿಸುವವರೇ ಎಸ್ಪಿಬಿ ಜೊತೆ ಈ ರೀತಿ ನಡೆದುಕೊಂಡಿದ್ದು ಸರಿಯೇ?