ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಗಡಿಗಳು ದೇವರ ಹೆಸರಿನಿಂದ ಮುಕ್ತವಾಗುವುದಕ್ಕಿಂತ ಕುಡುಕರು ಚಟ ಮುಕ್ತರಾಗಲಿ’

Last Updated 7 ನವೆಂಬರ್ 2019, 20:15 IST
ಅಕ್ಷರ ಗಾತ್ರ

‘ರಾಜ್ಯದಲ್ಲಿನ ಎಲ್ಲಾ ಮದ್ಯ ಮಾರಾಟ ಕೇಂದ್ರಗಳಿಂದ ದೇವರ ಹೆಸರು ಮುಕ್ತಗೊಳಿಸಲು ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಮುಜರಾಯಿ ಸಚಿವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ನ. 7). ಹೆಸರು ಯಾವುದಿದ್ದರೇನು ಮಾರುವುದು ಅದೇ ತಾನೇ? ಅಂಗಡಿಗಳು ದೇವರ ಹೆಸರಿನಿಂದ ಮುಕ್ತವಾಗುವುದಕ್ಕಿಂತ ಕುಡುಕರು ಚಟದಿಂದ ಮುಕ್ತವಾಗಬೇಕಿದೆ.

ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣ, ಮದ್ಯಪಾಲಾಗದೆ ಕುಟುಂಬವನ್ನು ಸೇರಬೇಕಿದೆ. ಸರ್ಕಾರಕ್ಕೆ ನಿಜವಾಗಿಯೂ ಆಸಕ್ತಿಯಿದ್ದಲ್ಲಿ ಜನರನ್ನು ಚಟದಿಂದ ಮುಕ್ತಗೊಳಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿ. ‘ಇಲ್ಲಿಗೆ ಬರಬೇಡಿ- ಇದು ಮದ್ಯದಂಗಡಿ’ ಎಂದು ಈ ಅಂಗಡಿಗಳ ಮುಂದೆ ಬರೆಸಲಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT