ಆದರೆ ಚಿರತೆಗಳೇಕೆ ನರಹಂತಕಗಳಾಗಿ ಬದಲಾಗುತ್ತವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಇಂತಹ ಸ್ಥಿತಿಗೆ ನೇರ ಕಾರಣ ಅರಣ್ಯ ನಾಶ, ನದಿಮೂಲಗಳ ನಾಶ, ಅರಣ್ಯದೊಳಗೆ ನಡೆಯುವ ಗಣಿಗಾರಿಕೆ, ಒತ್ತುವರಿ, ಚಿರತೆಗಳ ಆವಾಸಸ್ಥಾನಕ್ಕೆಧಕ್ಕೆ ಮುಂತಾದವು. ಇವುಗಳನ್ನು ತಡೆಯದಿದ್ದರೆ ಮಾಂಸಾಹಾರಿ ಪ್ರಾಣಿಗಳು ನರಹಂತಕಗಳಾಗಿ ಬದಲಾಗುತ್ತವೆ. ಚಿರತೆಗಳನ್ನು ಹೀಗೆ ನಾವೇ ನರಹಂತಕಗಳಾಗಿ ಬದಲಾಯಿಸಿ, ಈಗ ಕಂಡಲ್ಲಿ ಗುಂಡಿಡಲು ನಾವೇ ಆದೇಶಿಸುವುದು ಎಷ್ಟು ಸರಿ?