ಇಂದಿರಾ ಕ್ಯಾಂಟೀನ್ಗೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಕಡಿಮೆ ಆದಾಯವುಳ್ಳ ಹಲವರು ಹೋಗುತ್ತಿದ್ದಾರೆ. ಅಲ್ಲಿ ಊಟ, ಉಪಾಹಾರದ ದರ ಏರಿಕೆಯಾದರೆ ಅವರೆಲ್ಲ ಇತರೆಡೆಗೆ ಧಾವಿಸಬೇಕಾಗುತ್ತದೆ. ಆಗ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚುವ ಪ್ರಸಂಗ ಬರಬಹುದು. ಇಂತಹ ಜನವಿರೋಧಿ ಪ್ರಸ್ತಾವವನ್ನು ಒಪ್ಪದೆ, ಹೆಚ್ಚಿನ ದರ ನಿಗದಿಪಡಿಸುವ ಚಿಂತನೆಯಿಂದ ಬಿಬಿಎಂಪಿ ಹಿಂದೆ ಸರಿಯಬೇಕು.