ಬೆಂಗಳೂರಿನ ಹೊರವಲಯದ ರಸ್ತೆಗಳಲ್ಲಿ ಸರಕು ಸಾಗಣೆ ವಾಹನಗಳನ್ನು ತಡೆದು, ಲಂಚ ಪಡೆದು ನಗರದೊಳಗೆ ಬಿಡುತ್ತಿದ್ದ ಸಾರಿಗೆ ಇಲಾಖೆಯ ಇಬ್ಬರು ಇನ್ಸ್ಪೆಕ್ಟರ್ಗಳು, ಚಾಲಕನ ಮಾರುವೇಷದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠ ರವಿ ಚನ್ನಣ್ಣನವರ ಬಲೆಗೆ ಬಿದ್ದಿರುವ ಸುದ್ದಿ (ಪ್ರ.ವಾ., ಏ. 4)ಓದಿ ಆಶ್ಚರ್ಯವಾಯಿತು. ಸಿನಿಮಾದಲ್ಲಿ ಮಾತ್ರ ಇಂತಹ ಸನ್ನಿವೇಶವನ್ನು ನೋಡಲು, ಕೇಳಲು ಸಾಧ್ಯವಿತ್ತು.ಚನ್ನಣ್ಣನವರ ಚಾಲಾಕಿತನದ ಪ್ರಯತ್ನ ತಿಳಿದು ಹೆಮ್ಮೆ ಅನ್ನಿಸಿತು. ಇವರ ಈ ಬಗೆಯ ವಿಶೇಷ ಸೇವೆಯು ಇಡೀ ದೇಶದ ಪೊಲೀಸರಿಗೆ ಮಾದರಿಯಾಗಿದೆ.