ಬೆಂಗಳೂರು ಬೆಳೆದಂತೆ ಹಳ್ಳಿಗಳು, ತೋಟದ ಮನೆಗಳೆಲ್ಲ ಬಿಲ್ಡರ್ಗಳ ಪಾಲಾಗಿ, ಅಪಾರ್ಟ್ಮೆಂಟ್ಗಳು
ತಲೆಯೆತ್ತಿ, ಜನಸಂಖ್ಯೆ ಹೆಚ್ಚಿದಂತೆ ನಾನಾ ರೀತಿಯ, ನಾನಾ ಭಾಷೆಯ, ನಾನಾ ವೇಷದ ಜನರೆಲ್ಲಾ ತರಕಾರಿ ಮಾರಲು ಬರತೊಡಗಿದರು. ಅದರ ಮರೆಯಲ್ಲಿ ಕೆಲವು ಕಂಟಕರು ಒಂಟಿ ಮನೆಗಳು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿಯ ವೇಳೆ ಕಳ್ಳತನ ಮಾಡುವುದು, ಬಾಯಾರಿಕೆಯಂತೆ ನಟಿಸಿ, ಅನುಕಂಪ ಗಿಟ್ಟಿಸಿ, ನೀರು ತರಲು ಒಳ ಹೋದಾಗ ಹಿಂಬಾಲಿಸಿ ಬಂದು ಚಿನ್ನಾಭರಣ ದೋಚುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಹಾಗಾಗಿ, ತರಕಾರಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದರೆ, ಸರ್ಕಾರದಿಂದ ಅನುಮತಿ ಪಡೆದ ವ್ಯಕ್ತಿಗಳು ಎಂಬ ನಂಬಿಕೆಯಿಂದ ನಾವೆಲ್ಲ ನಿರಾಳವಾಗಿ ತರಕಾರಿ ಖರೀದಿಸಬಹುದು.