ಜನಪದ ಕಲಾವಿದರ ಪಾಡು ಇವರಿಗಿಂತ ಭಿನ್ನವೇನಲ್ಲ. ಜನಪದ ಜಾತ್ರೆ, ಸಂಸ್ಕೃತಿ ಇಲಾಖೆಯ ಜಯಂತಿಗಳು, ಊರ ಹಬ್ಬ
ಎಲ್ಲವೂ ಸ್ಥಗಿತಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಕಲಾವಿದರಿಗಾಗಿ ವಿಶೇಷ
ಆರ್ಥಿಕ ಪ್ಯಾಕೇಜ್ ಘೋಷಿಸಿ, ಒಂದು ನಿರ್ದಿಷ್ಟ ಕ್ರಿಯಾಯೋಜನೆಯ ಮೂಲಕ ನೆರವಿಗೆ ಧಾವಿಸಬೇಕಿದೆ. ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ರಂಗಸಮಾಜದ ಸದಸ್ಯರು, ರಂಗಾಯಣಗಳ ನಿರ್ದೇಶಕರು ಈ ಬಗ್ಗೆ ತುರ್ತಾಗಿ ಗಮನಹರಿಸಬೇಕಾಗಿದೆ.