ಆಭರಣ ತಯಾರಕರ ಮಕ್ಕಳು ಕುಟುಂಬದ ವೃತ್ತಿಯನ್ನು ಮುಂದುವರಿಸಲು ಹಿಂದೇಟು ಹಾಕುತ್ತಿದ್ದು, ಸಾಂಸ್ಕೃತಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಈ ನಡುವೆ, ಬೆಳ್ಳಿ ಬಂಗಾರದ ದರವೂ ಹೆಚ್ಚಾಗುತ್ತಿದೆ. ಇದರಿಂದ ನುರಿತ ಕುಶಲಕರ್ಮಿಗಳೇ ಕೈಕಟ್ಟಿ ಕುಳಿತಿದ್ದಾರೆ. ಜೊತೆಗೆ, ಬೇರೆ ವೃತ್ತಿಯನ್ನು ಆರಂಭಿಸಲು ಅವರು ಸೌಲಭ್ಯವಂಚಿತರಾಗಿದ್ದಾರೆ. ಇದನ್ನೆಲ್ಲ ಮನಗಂಡು, ಕುಶಲಕರ್ಮಿಗಳ ಬದುಕು ಮುಳುಗದಂತೆ ಸರ್ಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.