ಈ ಹುದ್ದೆಗಳ ನೇಮಕಾತಿಯಲ್ಲಿ ಹಲವಾರು ವರ್ಷಗಳಿಂದಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಿಐಡಿ ತನಿಖೆಯ ಮುಖಾಂತರವೂ ಅದು ಬಯಲಿಗೆ ಬಂದಿದೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಇದ್ದುದೂ ಭ್ರಷ್ಟಾಚಾರಕ್ಕೆ ಹೆಚ್ಚು ಅವಕಾಶವಾಗಿ ಒದಗಿಬಂದಿತ್ತು. ಇದರಿಂದ, ಪ್ರಭಾವ ಇಲ್ಲದೆ ಬರೀ ಪ್ರತಿಭೆಯನ್ನೇ ನೆಚ್ಚಿಕೊಂಡವರು ಇಂತಹ ಹುದ್ದೆಗಳ ಆಸೆಯನ್ನೇ ಬಿಡಬೇಕಾದ ಸ್ಥಿತಿ ಇತ್ತು.