ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ಕಚೇರಿಗೆ ಇತ್ತೀಚೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಭರವಸೆ ನೀಡಿರುವುದು ಸ್ವಾಗತಾರ್ಹ. ಇಂತಹದ್ದೊಂದು ಮಂಡಳಿ ಇದೆ ಎನ್ನುವುದೇ ಬಡ ಬ್ರಾಹ್ಮಣರಿಗೆ ಸಂತಸದ ಸಂಗತಿ. ಅನಾದಿ ಕಾಲದಿಂದಲೂ ಬ್ರಾಹ್ಮಣರು ವಿದ್ಯೆಗೆ, ಬುದ್ಧಿಗೆ ಬೆಲೆ ಕೊಡುತ್ತಾ ಬಂದವರು. ಬ್ರಾಹ್ಮಣರು ಆತ್ಮಾಭಿಮಾನಿಗಳಾದ್ದರಿಂದ ದೇಹಿ ಎಂದು ಕೈಚಾಚಲು ಹಿಂದೆ ಸರಿದವರು. ಉಚ್ಚ ಜಾತಿ, ಮುಂದುವರಿದವರು ಎಂಬ ಹಣೆಪಟ್ಟಿ ಕಟ್ಟಿ ಆರ್ಥಿಕವಾಗಿ, ರಾಜಕೀಯವಾಗಿ ಹಿಂದೆ ದೂಡಿದುದೇ ಇವರಲ್ಲಿ ಹೆಚ್ಚಿನವರ ಸ್ಥಿತಿ ಇಂದು ಹೀನಾಯವಾಗಲು ಕಾರಣ.