ವಿವಿಧ ಕ್ಷೇತ್ರಗಳ ಸಾಧಕರಿಗೆ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಸ್ವಾಗತಾರ್ಹ. ಆದರೆ ಅರ್ಜಿ ಸಲ್ಲಿಸಿ, ಪ್ರಶಸ್ತಿಗಾಗಿ ಒತ್ತಡ ಹಾಕುವುದು ಪ್ರಶಸ್ತಿ ಪಡೆಯುವವರ ವ್ಯಕ್ತಿತ್ವ ಹಾಗೂ ಸಾಧನೆಗೆ ಶೋಭೆ ತರುವುದಿಲ್ಲ. ಪ್ರಶಸ್ತಿಗೆ ಅರ್ಹರಾದವರನ್ನು ಸರ್ಕಾರವೇ ಗುರುತಿಸಿದರೆ ಪ್ರಶಸ್ತಿಯ ಘನತೆ ಮತ್ತು ಪಡೆದವರ ಗೌರವ ಎರಡೂ ಹೆಚ್ಚುತ್ತವೆ. ಇಲ್ಲವಾದಲ್ಲಿ, ಎಲೆಮರೆಯ ಕಾಯಿಯಂತೆ ಸೇವೆ- ಸಾಧನೆ ಮಾಡಿದವರು ಬೆಳಕಿಗೆ ಬರುವುದೇ ಇಲ್ಲ.