ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಾಸ್ತವಾಂಶಗಳನ್ನು ಸ್ವೀಕರಿಸುವವರ ಮನಃಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಜನರಿಗೆ ವಾಸ್ತವಕ್ಕಿಂತ ಭ್ರಮೆಯ ಬದುಕೇ ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಸಂಸ್ಥೆಗಳ ಸಮೀಕ್ಷೆಗಳು, ವರದಿಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಪರಿಪಾಟ ಹೆಚ್ಚುತ್ತಿದೆ. ಯಾವುದೇ ವಿಷಯವಾಗಿರಲಿ, ಅದಕ್ಕೆ ಧರ್ಮ, ಜಾತಿ, ರಾಜಕೀಯದ ಬಣ್ಣ ಅಂಟಿಸಿ ವಿಷಯಾಂತರಗೊಳಿಸಿ ಲಾಭಕ್ಕೆ ಬಳಸುವವರ ಸಂಖ್ಯೆಯೇ ಹೆಚ್ಚು.