ಆದರೆ ಕರ್ನಾಟಕದಲ್ಲಿ ಇತ್ತೀಚೆಗೆ ತಮ್ಮ ತಮ್ಮ ಜಾತಿ ಅಭಿವೃದ್ಧಿಗಾಗಿ ಮಂಡಳಿಗಳನ್ನು ರಚಿಸಿ ಎಂದು ಬೇಡಿಕೆ ಇಡುತ್ತಿರುವ, ತಮ್ಮ ಜಾತಿಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಪಡಿಸುತ್ತಿರುವ,ಜಾತಿಗೊಂದು ಮಠ, ಮಠಕ್ಕೊಬ್ಬ ಸ್ವಾಮೀಜಿ, ಪ್ರತಿವರ್ಷ ಮಠಕ್ಕಿಷ್ಟು ಅನುದಾನ ಬೇಕೇಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಗಳನ್ನು (ಸ್ವತಃ ಸ್ವಾಮೀಜಿಗಳೇ ಬೀದಿಗಿಳಿದು!) ನೋಡಿದರೆ, ಕುವೆಂಪು ಅವರು ಅಂದುಕೊಂಡಂತೆ ‘ಆತ್ಮಶ್ರೀ’ಯ ಜಾಗೃತಿಗೆ ಐನೂರು ವರ್ಷವಲ್ಲ, ಐದು ಸಾವಿರ ವರ್ಷಗಳಾದರೂ ಸಾಧ್ಯವಿಲ್ಲವೇನೋ ಅನಿಸುತ್ತಿದೆ.