ಜನಸಾಮಾನ್ಯರನ್ನು ಅವರ ಪಾಡಿಗೆ ಬಿಟ್ಟರೆ ಕೋಮುವಾದ, ಜಾತಿಜಗಳ, ವೈಷಮ್ಯ, ಧರ್ಮದ ಏರುಪೇರು ಯಾವುದೂ ಇರುವುದಿಲ್ಲ. ಹಿಡಿ ಅನ್ನ, ಇಷ್ಟು ನೀರು, ನೆಮ್ಮದಿಯ ನಿದ್ದೆಗೆ ಬಡಿದಾಡುವ ಜನರು ದೇವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಟ್ಟೆ ತುಂಬಿದ, ಕೆಲಸವಿಲ್ಲದ, ಒಣ ರಾಜಕೀಯ ಮಾಡುವ, ಕೆದಕಿ ಕಂಡವರ ಬದುಕು ಇಣುಕುವ ಕೆಲವೇ ಮಂದಿಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಬಸವಣ್ಣನ ನಾಡಿದು. ದೇವನೊಬ್ಬ ನಾಮ ಹಲವು ಎಂದು ಬಾಯಲ್ಲಿ ಹೇಳಿದರಾಯಿತೇ? ಆಚರಣೆ ಬೇಡವೇ?